Bangalore, ಮೇ 21 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 202ನೇ ಎಪಿಸೋಡ್‌ ಕಥೆ ಹೀಗಿದೆ. ಪೋಸ್ಟ್‌ಮ್ಯಾನ್‌ ಜೊತೆ ಮಾತನಾಡಿದ ನಂತರ ಶಿವು ಮತ್ತೆ ಮಾವನ ಮನೆಗೆ ಹೋಗಿ ಪಾರು ಮೆಡಿಕಲ್‌ ಲೈಸನ್ಸ್‌ ಕೇಳುತ್ತಾನೆ. ಆದರೆ ಅದನ್ನು ಛತ್ರಿ ಹರಿದ ವಿಚಾರ ತಿಳಿದು ಶಿವು ಬೇಸರಗೊಳ್ಳುತ್ತಾನೆ. ಮತ್ತೊಂದೆಡೆ ಪೇಪರ್‌ನಲ್ಲಿ ಇಂದ್ರಿ ಬೇಕಂತಲೇ ಮನು ಬಗ್ಗೆ ಸುಳ್ಳು ಜಾಹೀರಾತು ಹಾಕಿಸಿ ಅದನ್ನು ಶಿವು ಮನೆಗೆ ಹಾಕಿಸುತ್ತಾಳೆ. ಅದನ್ನು ನೋಡಿದ ಶಿವು ಮನೆಯವರು ಮನು ನಿಜವಾಗಲೂ ವಿದೇಶದಲ್ಲಿ ಓದಿ ವಾಪಸ್‌ ಬರುತ್ತಿದ್ದಾನೆ ಎಂದು ನಂಬುತ್ತಾರೆ.

ಮಾವನ ಮನೆಯಿಂದ ಬಂದ ಶಿವು ಅಂಗಡಿ ಬಳಿ ಯೋಚನೆ ಮಾಡುತ್ತಾ ಕೂರುತ್ತಾನೆ. ಛತ್ರಿ ಅಣ್ಣ ಲೈಸನ್ಸ್‌ ಹರಿದ ವಿಚಾರವನ್ನು ಪಾರ್ವತಿಗೆ ಹೇಗೆ ಹೇಳುವುದು? ನಿನಗೆ ಆಸ್ಪತ್ರೆ ಹಾಕಿಕೊಡಲು ಆಗುವುದಿಲ್ಲ ಎಂದು ಬೇಕಾದರೆ ಧೈರ್ಯದಿಂದ ಹೇಳಿಬಿಡುತ್ತೇನೆ, ಆದರೆ ನೀನು ಇನ್ಮುಂದೆ ಡಾಕ್ಟರ್‌ ಆಗಲು ಸಾಧ್ಯವೇ ಇಲ್ಲ ಅನ್ನೋದನ್ನು ಹೇಗೆ ...