Bangalore, ಮೇ 16 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 199ನೇ ಎಪಿಸೋಡ್‌ ಕಥೆ ಹೀಗಿದೆ. ಗೆಳತಿ ಕೀರ್ತಿಗೆ ಈಗಾಗಲೇ ಮೆಡಿಕಲ್‌ ಲೈಸನ್ಸ್‌ ಸಿಕ್ಕಿರುವ ವಿಚಾರ ತಿಳಿದ ಪಾರು ಬಹುಶ: ತವರು ಮನೆ ಅಡ್ರೆಸ್‌ಗೆ ನನ್ನ ಲೈಸನ್ಸ್‌ ಬಂದಿರಬಹುದು ಎಂದುಕೊಳ್ಳುತ್ತಾಳೆ. ಲೈಸನ್ಸ್‌ ತೆಗೆದುಕೊಂಡು ಬರಲು ಶಿವು ಮಾವನ ಮನೆಗೆ ಹೋಗುತ್ತಾನೆ. ಆದರೆ ವೀರಭದ್ರ, ತನಗೆ ಯಾವ ಲೈಸನ್ಸ್‌ ಬಂದಿಲ್ಲವೆಂದು ಸುಳ್ಳು ಹೇಳುತ್ತಾನೆ. ಶಿವು ಜೊತೆ ಸುಶೀಲಾ ಮಾತನಾಡಬಾರದು ಎಂಬ ಕಾರಣಕ್ಕೆ ಅವಳು ಕಾಫಿ ಮಾಡಲು ಹೋದಾಗ ಅಡುಗೆ ಮನೆ ಬಾಗಿಲು ಹಾಕಿ ಬರುತ್ತಾನೆ.

ಅಡುಗೆ ಮನೆಗೆ ಇದ್ದ ಮತ್ತೊಂದು ಬಾಗಿಲಿನಿಂದ ಸುಶೀಲಾ ಹೊರಗೆ ಬರುತ್ತಾಳೆ. ಆಗಲೇ ಬಂದು ಶಿವು ಜೊತೆ ಮಾತನಾಡಬೇಡ ಎಂದು ಏಕೆ ಧಮ್ಕಿ ಹಾಕಿ ಬಂದ್ರಿ? ಅಷ್ಟೇ ಅಲ್ಲದೆ ಅಡುಗೆ ಮನೆ ಬಾಗಿಲು ಹಾಕಿಕೊಂಡು ಬಂದಿದ್ದೀರ ಎಂದು ಸುಶೀಲಾ ಕೇಳುತ್ತಾಳೆ. ಆ ಮಾತು ಕೇಳಿ ಶಿವು ಆಶ್ಚರ್ಯಗೊಳ್ಳುತ್ತಾನೆ. ಸುಶೀಲಾ ತಮಾಷೆಯಾಗಿ ಮಾತನಾಡುತ...