ಭಾರತ, ಮೇ 15 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 198ನೇ ಎಪಿಸೋಡ್‌ ಕಥೆ ಹೀಗಿದೆ. ತಂಗಿಯರು ಹಾಗೂ ಪಾರ್ವತಿಗೆ ತಾನೇ ತೋಟದಿಂದ ತೆಗೆದು ಜೇನನ್ನು ಶಿವು ತಂದುಕೊಂಡುತ್ತಾನೆ. ಪಾರು ಮತ್ತೆ ರೊಮ್ಯಾಂಟಿಕ್‌ ಕನಸು ಕಾಣುತ್ತಾಳೆ. ಆದರೆ ಅದು ಕನಸು ಎಂದು ಅರಿವಾದ ನಂತರ ಶಿವು ಮೇಲೆ ಮುನಿಸು ತೋರುತ್ತಾಳೆ. ಮತ್ತೊಂದೆಡೆ ಜಿಮ್‌ ಸೀನ ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪಿಂಕಿ ಡೆತ್‌ನೋಟ್‌ನಲ್ಲಿ ಸೀನ ಹಾಗೂ ರಶ್ಮಿ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ವಿಷ ಕುಡಿಯಬೇಕು ಎನ್ನುವಷ್ಟರಲ್ಲಿ ಸೀನ ಅವಳನ್ನು ತಡೆಯುತ್ತಾನೆ.

ಪಾರ್ವತಿ ಸರಿಯಾಗಿ ಜೇನು ಕುಡಿಯಲಿಲ್ಲ ಎಂದು ಅದಕ್ಕೆ ಶಿವು ಬೆಲ್ಲ ಸೇರಿಸಲು ಅಡುಗೆ ಮನೆಗೆ ಹೋಗುತ್ತಾನೆ. ಅಷ್ಟರಲ್ಲಿ ಪಾರ್ವತಿ ಸ್ನೇಹಿತೆ ಕೀರ್ತಿ ಕರೆ ಮಾಡುತ್ತಾಳೆ. ಉಭಯ ಕುಶಲೋಪರಿ ವಿಚಾರಿಸಿದ ನಂತರ ಕಾಲೇಜಿನಲ್ಲಿ ಗ್ರಾಜುಯೇಷನ್‌ ದಿನ ಆಚರಿಸುವುದಾಗಿ ಕೀರ್ತಿ ಮಾಹಿತಿ ನೀಡುತ್ತಾಳೆ. ಆ ವಿ...