Bangalore, ಮೇ 17 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 200ನೇ ಎಪಿಸೋಡ್‌ ಕಥೆ ಹೀಗಿದೆ. ಮಾವನ ಮನೆಯಲ್ಲಿ ಪಾರ್ವತಿ ಮೆಡಿಕಲ್‌ ಲೈಸನ್ಸ್‌ ದೊರೆಯದೆ ಶಿವು ನಿರಾಶನಾಗಿ ಮನೆಗೆ ವಾಪಸ್‌ ಆಗುತ್ತಾನೆ. ಇತ್ತ ರತ್ನ ಸ್ಕೂಲ್‌ಗೆ ಹೋಗುವಾಗ ಮಾಕಾಳವ್ವನ ಸೇವೆ ಮಾಡುವವರು ಪರಶುಗೆ ಚಾಟಿಯಿಂದ ಹೊಡೆಯುತ್ತಾರೆ. ತನ್ನ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಆತ ಹರಕೆ ಕಟ್ಟಿಕೊಂಡಿದ್ದ ಅದಕ್ಕಾಗಿ ಅವನಿಗೆ ಹೊಡೆದಿದ್ದಾಗಿ ದೇವಿ ಸೇವೆ ಮಾಡುವವರು ಹೇಳುತ್ತಾರೆ. ಆ ಮಾತು ಕೇಳಿ ರತ್ನಗೆ ಆಶ್ಚರ್ಯವಾಗುತ್ತದೆ.

ಪಾರ್ವತಿ ತರಕಾರಿ ಕತ್ತರಿಸುತ್ತಾ ಆ ದಿನ ಶಿವು ಮೈ ಮೇಲೆ ದೇವಿ ಬಂದು ಹೇಳಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಾಳೆ. ರಶ್ಮಿ ಮದುವೆಗೆ ಅತ್ತೆ ಬಂದಿದ್ದು ನಿಜಾನಾ? ಹಾಗಾದರೆ ಅವರು ತಮ್ಮ ಮಕ್ಕಳ ಕಣ್ಣಿಗೆ ಏಕೆ ಕಾಣಿಸಿಕೊಳ್ಳಲಿಲ್ಲ. ಆ ದೇವಿ ಹೇಳಿದ ರಹಸ್ಯ ಏನು ನನಗೆ ಒಂದೂ ಅರ್ಥವಾಗುತ್ತಿಲ್ಲ ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಯೋಚಿಸುತ್ತಾಳೆ. ಅಷ್...