Bengaluru, ಮೇ 6 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 190ನೇ ಎಪಿಸೋಡ್‌ ಕಥೆ ಹೀಗಿದೆ. ಗೋಡಂಬಿ ಮೇಲೆ ಆದ ಹಲ್ಲೆಗೆ ಸಂಬಂಧಿಸಿದಂತೆ ಪಾರ್ವತಿ ಪೊಲೀಸರಿಗೆ ದೂರು ಕೊಡುತ್ತಾಳೆ. ಕಾನ್ಸ್‌ಟೆಬಲ್‌ ಬಂದು ಶಿವಣ್ಣನ ಬಳಿ ಸ್ಟೇಟ್‌ಮೆಂಟ್‌ ಪಡೆಯುತ್ತಾರೆ. ಹಿಂದಿನ ರಾತ್ರಿ ಮುಸುಕುಧಾರಿಯೊಬ್ಬ ಗೋಡಂಬಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದನ್ನು ಶಿವಣ್ಣನ ಬಳಿ ಸೀನ ಹೇಳುತ್ತಾನೆ. ಅದನ್ನು ಕೇಳಿ ಶಿವಣ್ಣ ಶಾಕ್‌ ಆಗುತ್ತಾನೆ. ಮತ್ತೊಂದೆಡೆ ವೀರಭದ್ರ, ಮಗನನ್ನು ಕಾಪಾಡಲು ಹರಸಾಹಸ ಮಾಡುತ್ತಿದ್ದಾನೆ.

ಹೆಂಡತಿ ರಶ್ಮಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಸೀನ ಮನೆಗೆ ಬರುತ್ತಾನೆ. ಗುಂಡಮ್ಮನ ಬಟ್ಟೆಗಳನ್ನು ಒಂದು ಬ್ಯಾಗಿಗೆ ಜೋಡಿಸಿಕೊಳ್ಳುತ್ತಾನೆ. ಅದನ್ನು ನೋಡಿ ಸೀನನ ತಾಯಿ ಲೀಲಾ ಕೋಪಗೊಳ್ಳುತ್ತಾಳೆ. ನಿನ್ನನ್ನು ಅವಳು ನಾಯಿಯಂತೆ ಕಾಣುತ್ತಿದ್ದಾಳೆ. ಅವಳಿಗೆ ಬಟ್ಟೆ ಏಕೆ ತೆಗೆದುಕೊಂಡು ಹೋಗುತ್ತಿದ್ದೀಯ? ಅವಳ ಸೇವೆ ಮಾಡುವುದು ಅಲ್ಲದೆ ಅವಳ ಜೊತೆ ಸಲಿಗೆಯಿಂದ ನ...