ಭಾರತ, ಮೇ 2 -- ಅಣ್ಣಯ್ಯ ಧಾರಾವಾಹಿ ನಿನ್ನೆಯ ಸಂಚಿಕೆ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 189ನೇ ಎಪಿಸೋಡ್‌ ಕಥೆ ಹೀಗಿದೆ. ಗೋಡಂಬಿ ಬದುಕಿ ವಾಪಸ್‌ ಬಂದರೆ ನಮಗೆ ಅಪಾಯ ತಪ್ಪಿದ್ದಲ್ಲ, ನಿನ್ನ ಜೊತೆ ನಾನು ಕಟ್ಟಿದ ಕೋಟೆಯೂ ಒಡೆಯುತ್ತದೆ, ಹೇಗಾದರೂ ಮಾಡಿ ಅವನನ್ನು ಮುಗಿಸಿಬಿಡು ಎಂದು ವೀರಭದ್ರ, ಮಗನಿಗೆ ಕುಮ್ಮಕ್ಕು ಕೊಡುತ್ತಾನೆ. ಗೋಡಂಬಿ ವಿಚಾರ ತಿಳಿದ ಜಿಮ್‌ ಸೀನ ಆಸ್ಪತ್ರೆಗೆ ಬರುತ್ತಾನೆ, ನಾನು ಇಲ್ಲೇ ಇರುತ್ತೇನೆ, ನೀವೆಲ್ಲಾ ಮನೆಗೆ ಹೋಗಿ ಎಂದು ಶಿವು, ಪಾರ್ವತಿಯನ್ನು ಕಳಿಸುತ್ತಾನೆ.

ಗೋಡಂಬಿಯನ್ನು ಕೊಲ್ಲಲು ಪರಶು ಡಾಕ್ಟರ್‌ ವೇಷದಲ್ಲಿ ಬರುತ್ತಾನೆ, ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್‌ ಹಾಕಿರುತ್ತಾನೆ, ಅವನು ಗೋಡಂಬಿ ಮೇಲೆ ಹಲ್ಲೆ ಮಾಡಬೇಕು ಎನ್ನುವಷ್ಟರಲ್ಲಿ ಮಲಗಿದ್ದ ಸೀನ ಎಚ್ಚರವಾಗುತ್ತಾನೆ, ಯಾರು ನೀವು ಎಂದು ಕೇಳುತ್ತಾನೆ, ಅವನು ಎಚ್ಚರವಾಗಿದ್ದನ್ನು ನೋಡಿ ಪರಶು ಗಾಬರಿಯಾಗುತ್ತಾನೆ, ಚೆಕಪ್‌ ಮಾಡಲು ಬಂದೆ ಎಂದು ಪ...