ಭಾರತ, ಮೇ 7 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 192ನೇ ಎಪಿಸೋಡ್‌ ಕಥೆ ಹೀಗಿದೆ. ಯಾರೂ ಇಲ್ಲದೆ ಸಮಯ ನೋಡಿಕೊಂಡು ಪಿಂಕಿಯನ್ನು ಲೀಲಾ ಮನೆಗೆ ಕರೆತರುತ್ತಾಳೆ. ರಶ್ಮಿ ಬಟ್ಟೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ಸೀನನನ್ನು ಲೀಲಾ ತಡೆಯುತ್ತಾಳೆ. ನನಗೆ ಈಗಲೇ ತಾಳಿ ಕಟ್ಟುವಂತೆ ಪಿಂಕಿ ಹಟ ಹಿಡಿಯುತ್ತಾಳೆ. ಇತ್ತ ರಶ್ಮಿ ತಾನು ಅತ್ತೆ ಮನೆಯಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಗೋಡಂಬಿ ಬಳಿ ಹೇಳಿಕೊಂಡು ಅಳುತ್ತಾಳೆ. ನಾಗೇಗೌಡನ ಹೆಂಡತಿ ಇಂದ್ರಾಣಿ ಆರೋಗ್ಯ ಸರಿಯಿಲ್ಲ ಎಂದು ನೆಪ ಹೇಳಿಕೊಂಡು ಶಿವಣ್ಣನ ಮನೆಗೆ ಬಂದು ಇಲ್ಲದ ಕಥೆ ಕಟ್ಟಿ ಅನುಕಂಪ ಗಿಟ್ಟಿಸಿಕೊಳ್ಳುತ್ತಾಳೆ.

ಗೋಡಂಬಿ ಬಳಿ ರಶ್ಮಿ ಮಾತನಾಡುವಾಗ ಶಿವಣ್ಣ ಬರುತ್ತಾನೆ. ಏನವ್ವಾ ಇದು ರಶ್ಮಿ ಎಂದು ಶಿವಣ್ಣ ಕೇಳುತ್ತಾನೆ. ಅಣ್ಣನನ್ನು ನೋಡುತ್ತಿದ್ದಂತೆ ರಶ್ಮಿ ಗಾಬರಿಯಾಗುತ್ತಾಳೆ. ಶಿವಣ್ಣ ನನ್ನ ಮಾತನ್ನು ಕೇಳಿಸಿಕೊಂಡನಾ ಎಂದು ಭಯಪಡುತ್ತಾಳೆ. ಏನಣ್ಣ ಎಂದು ರಶ್ಮಿ ಕೇಳುತ್ತಾಳ...