ಭಾರತ, ಮೇ 13 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 196ನೇ ಎಪಿಸೋಡ್‌ ಕಥೆ ಹೀಗಿದೆ. ಪಾರ್ವತಿ ಡಾಕ್ಟರ್‌ ಕೆಲಸಕ್ಕೆ ಹೋಗಬೇಕು ಅನ್ನೋದು ಶಿವು ಆಸೆಯಾದರೆ ಪಾರು ಉದ್ಧೇಶವೇ ಬೇರೆ ಆಗಿದೆ. ಅಂಗಡಿಗೆ ಹೋಗಿ ಶಿವುಗೆ ಸಹಾಯ ಮಾಡುವ ಪಾರ್ವತಿ, ತನ್ನ ಅತ್ತೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ನಿನ್ನ ತಾಯಿ ಬಗ್ಗೆ ಎಷ್ಟು ಗೊತ್ತೋ ಅಷ್ಟು ಹೇಳು ಎಂದು ಪಾರ್ವತಿ ಹೇಳಿದಾಗ ಶಿವು ಸಿಟ್ಟಾಗುತ್ತಾನೆ. ನನ್ನ ಮುಂದೆ ಅವರ ಬಗ್ಗೆ ಮಾತನಾಡಬೇಡ ಎಂದು ಕೋಪದಿಂದ ಟೇಬಲ್‌ ಮೇಲಿದ್ದ ವಸ್ತುಗಳನ್ನು ತಳ್ಳಿ ಅಲ್ಲಿಂದ ಹೊರಡುತ್ತಾನೆ.

ದಾರಿಯಲ್ಲಿ ಬರುವಾಗ ಪಾರ್ವತಿ ಮಾತುಗಳನ್ನೇ ಶಿವು ನೆನಪಿಸಿಕೊಳ್ಳುತ್ತಾನೆ. ಪಾರ್ವತಿ ಮೇಲೆ ನಾನು ಆ ರೀತಿ ಕೋಪ ತೋರಿಸಬಾರದಿತ್ತು. ನನ್ನ ಜೀವಕ್ಕೆ ಜೀವ ಆದ ಪಾರುವನ್ನು ಬೈಯ್ಯಬಾರದಿತ್ತು. ಪಾಪ ಅವಳಿಗೇನು ಗೊತ್ತು ನನ್ನ ತಾಯಿ ಬಗ್ಗೆ, ಓಡಿಹೋದವರ ಮಕ್ಕಳು ಎಂದು ಊರಿನವರು ನನ್ನನ್ನು ವ್ಯಂಗ್ಯ ಮಾಡುವಾಗಲೇ ನಾನು ಸುಮ್ಮನಿರ...