ಭಾರತ, ಮೇ 9 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 194ನೇ ಎಪಿಸೋಡ್‌ ಕಥೆ ಹೀಗಿದೆ. ಚಿಕ್ಕಮ್ಮನನ್ನು ಡ್ರಾಪ್‌ ಮಾಡುವ ನೆಪದಲ್ಲಿ ಶಿವಣ್ಣನ ಮನೆಗೆ ಬರುವ ಪರಶು ಅಲ್ಲಿಯೂ ಕೊಲೆ ಮಾಡಲು ಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ದೇವರ ಪ್ರಸಾದ ಪಡೆಯಲು ಪರಶು ಕೈ ಚಾಚಿದಾಗ, ರಶ್ಮಿ ತನ್ನ ಕೈಗೆ ಮಾಡಿದ್ದ ಗಾಯ ನೋಡಿ ಕೈ ಹಿಂದಕ್ಕೆ ತೆಗೆದುಕೊಳ್ಳುತ್ತಾನೆ. ಬೆಳಗ್ಗೆ ನಾನ್‌ ವೆಜ್‌ ತಿಂದಿದ್ದೆ ಆದ್ದರಿಂದ ಪ್ರಸಾದ ಬೇಡ ಎನ್ನುತ್ತಾನೆ. ಪರಶುನಲ್ಲಾದ ಬದಲಾವಣೆ ಕಂಡು ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ.

ಮನೆಯಲ್ಲಿ ಹೆಂಡತಿಯರು ಇಲ್ಲದ್ದನ್ನು ನೋಡಿದಾಗ ನನಗೆ ಹೇಳದೆ ಎಲ್ಲರೂ ಶಿವು ಮನೆಗೆ ಹೋಗಿರಬಹುದು, ಮತ್ತೊಂದೆಡೆ ಪರಶು ಕೂಡಾ ಕಾಣುತ್ತಿಲ್ಲ ಅವನಿಗೆ ಫೋನ್‌ ಮಾಡು ಎಂದು ಛತ್ರಿಗೆ ಹೇಳುತ್ತಾನೆ. ಇತ್ತ ಶಿವಣ್ಣನ ಮನೆಯಲ್ಲಿ ಎಲ್ಲರೂ ಊಟ ಮುಗಿಸಿ ಮಾತನಾಡುತ್ತಾರೆ. ಅಪ್ಪನ ಫೋನ್‌ ರಿಸೀವ್‌ ಮಾಡಿದ ಪರಶು ನಾನು ಕಲ್ಲು ಕ್ವಾರಿಯಲ್ಲಿದ್ದೇನೆ, ಅಮ್ಮ...