ಭಾರತ, ಮೇ 6 -- ಭಾರತ- ಪಾಕಿಸ್ತಾನ ನಡುವೆ ಸಂಬಂಧ ಹಳಸಿದ್ದು, ಬಿಕ್ಕಟ್ಟು ತೀವ್ರಗೊಳ್ಳುತ್ತಿರುವಾಗ ಯಾವುದೇ ತುರ್ತು ಪರಿಸ್ಥಿತಿ ಎದುರಿಸುವುದಕ್ಕೆ ನಾಗರಿಕ ಸ್ವರಕ್ಷಣಾ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ನಡೆಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ಏನಿದು ನಾಗರಿಕ ಸ್ವರಕ್ಷಣಾ ತಾಲೀಮು, ನಾವೇನು ಮಾಡುವುದಿರುತ್ತೆ, ಏನೇನು ಅನುಭವವಾಗಲಿದೆ, ಭಾರತ - ಪಾಕ್ ಯುದ್ಧ ಮುನ್ಸೂಚನೆಯೇ ಇದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇದು.

ಚಿತ್ರದಲ್ಲಿರುವುದು 2016ರ ಜನವರಿ 15 ರಂದು ಸೇನಾ ದಿನದ ಸಂದರ್ಭದಲ್ಲಿ ಭಾರತೀಯ ಸೇನೆ ತೋರಿಸಿದ ಅಣಕು ಯುದ್ಧ ತಾಲೀಮಿನ ಒಂದು ನೋಟ. ಇನ್ನು, ನಾಗರಿಕ ಸ್ವರಕ್ಷಣಾ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ಎಂಬುದು ಯುದ್ಧ, ಕ್ಷಿಪಣಿ ದಾಳಿಗಳು ಅಥವಾ ವೈಮಾನಿಕ ದಾಳಿ ಮುಂತಾದ ತುರ್ತು ಪರಿಸ್ಥಿತಿ ಎದುರಾದ ವೇಳೆ ನಾಗರಿಕರು ಮತ್ತು ಸರ್ಕಾರಿ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಪರೀಕ್ಷಿಸುವ ಉದ್ದೇಶವನ್ನು ಹೊಂದಿರುವಂಥದ್ದಾಗಿದೆ.

ಜಮ್ಮು - ಕಾ...