ಭಾರತ, ಮೇ 22 -- ಮೇ 3ರ ನಂತರ ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಅಗ್ರ-2ರಲ್ಲೇ ಉಳಿಯಲು ಭರ್ಜರಿ ಕಸರತ್ತು ನಡೆಸುತ್ತಿದೆ. ಮೇ 23ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲು ಸಿದ್ಧವಾಗಿದೆ. ಮೇ 9ರಂದು ಕಣಕ್ಕಿಳಿಯಬೇಕಿತ್ತಾದರೂ ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಪಂದ್ಯ ಮುಂದೂಡಲಾಗಿತ್ತು. ಆ ಬಳಿಕ ಐಪಿಎಲ್ ಮರುಆರಂಭದ ದಿನವಾದ ಮೇ 17ರಂದು ಕೆಕೆಆರ್ ವಿರುದ್ಧ ಸೆಣಸಾಟ ನಡೆಸಬೇಕಿತ್ತು. ಆದರೆ ಅಂದು ಮಳೆಯಿಂದಾಗಿ ಟಾಸ್ ಕಾಣದೆ ಪಂದ್ಯ ರದ್ದಾಗಿತ್ತು. ಇದೀಗ ಕೊನೆಗೂ ಮೈದಾನದಲ್ಲಿ ಕಣಕ್ಕಿಳಿಯಲು ಆರ್ಸಿಬಿ ಸಿದ್ಧವಾಗಿದೆ.
20 ದಿನಗಳ ಬಳಿಕ ಮೈದಾನಕ್ಕೆ ಮರಳುತ್ತಿರುವ ಆರ್ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಗಳು ಕಂಡಿವೆ. ಲುಂಗಿ ಎನ್ಗಿಡಿ ಮತ್ತು ಜೇಕಬ್ ಬೆಥೆಲ್ ಆರ್ಸಿಬಿ ತಂಡವನ್ನು ತೊರೆಯುತ್ತಿದ್ದಾರೆ. ಈ ಇಬ್ಬರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆ ಬಳಿಕ ತಂಡ ತೊರೆಯಲಿದ...
Click here to read full article from source
To read the full article or to get the complete feed from this publication, please
Contact Us.