ಭಾರತ, ಮೇ 22 -- ಮೇ 3ರ ನಂತರ ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಅಗ್ರ-2ರಲ್ಲೇ ಉಳಿಯಲು ಭರ್ಜರಿ ಕಸರತ್ತು ನಡೆಸುತ್ತಿದೆ. ಮೇ 23ರಂದು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯಲು ಸಿದ್ಧವಾಗಿದೆ. ಮೇ 9ರಂದು ಕಣಕ್ಕಿಳಿಯಬೇಕಿತ್ತಾದರೂ ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಪಂದ್ಯ ಮುಂದೂಡಲಾಗಿತ್ತು. ಆ ಬಳಿಕ ಐಪಿಎಲ್ ಮರುಆರಂಭದ ದಿನವಾದ ಮೇ 17ರಂದು ಕೆಕೆಆರ್ ವಿರುದ್ಧ ಸೆಣಸಾಟ ನಡೆಸಬೇಕಿತ್ತು. ಆದರೆ ಅಂದು ಮಳೆಯಿಂದಾಗಿ ಟಾಸ್ ಕಾಣದೆ ಪಂದ್ಯ ರದ್ದಾಗಿತ್ತು. ಇದೀಗ ಕೊನೆಗೂ ಮೈದಾನದಲ್ಲಿ ಕಣಕ್ಕಿಳಿಯಲು ಆರ್​ಸಿಬಿ ಸಿದ್ಧವಾಗಿದೆ.

20 ದಿನಗಳ ಬಳಿಕ ಮೈದಾನಕ್ಕೆ ಮರಳುತ್ತಿರುವ ಆರ್​ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಗಳು ಕಂಡಿವೆ. ಲುಂಗಿ ಎನ್​ಗಿಡಿ ಮತ್ತು ಜೇಕಬ್ ಬೆಥೆಲ್ ಆರ್​ಸಿಬಿ ತಂಡವನ್ನು ತೊರೆಯುತ್ತಿದ್ದಾರೆ. ಈ ಇಬ್ಬರು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆ ಬಳಿಕ ತಂಡ ತೊರೆಯಲಿದ...