Bangalore, ಮೇ 21 -- ಲಂಡನ್‌: ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯ ವಲಯದಲ್ಲಿ ಕನ್ನಡಕ್ಕೆ ಸಿಕ್ಕ ಗೌರವವಿದು. ಅದರಲ್ಲೂ ಇದು ನನ್ನ ಗೆಲುವು ಎನ್ನುವುದಕ್ಕಿಂತ ವೈವಿಧ್ಯತೆಗೆ ದೊರೆತ ಜಯ ಎನ್ನುವುದೇ ಅರ್ಥಪೂರ್ಣ. ನನ್ನ ಸುತ್ತಮುತ್ತಲಿನ ಪರಿಸರದಲ್ಲಿ ಹೆಣ್ಣು ಮಕ್ಕಳು ಪಡುತ್ತಿದ್ದ ಕಷ್ಟ, ಸಂಕೋಲೆಗಳೇ ಅಕ್ಷರ ರೂಪ ಪಡೆದವು. ಯಾವ ಕಥೆಯೂ ಸಣ್ಣದಾಗಿರುವುದಿಲ್ಲ. ಅನುಭವದ ಆಧಾರದ ಮೇಲೆ ರೂಪಗೊಂಡ ನೈಜ ಕಥನವದು. ಕಥೆಯಲ್ಲಿ ಮೂಡಿ ಬರುವ ಅನುಭವದ ಪ್ರತಿ ಎಳೆಯೂ ಕಥೆ ತೂಕವನ್ನು ಹೊಂದಿರುತ್ತದೆ. ಹಾಗೆ ಕನ್ನಡದಲ್ಲಿ ಇಂತಹ ಅನುಭವಗಳನ್ನು ಆಧರಿಸಿ ಸಣ್ಣ ಕಥೆಗಳನ್ನು ರಚಿಸಿದೆ. ಈಗ ಬೂಕರ್‌ ಪ್ರಶಸ್ತಿ ಪಡೆಯುವ ಹಂತಕ್ಕೆ ಹೋಗಿರುವ ಈ ಕೃತಿಯೂ ಕೂಡ ಹೀಗೆಯೇ ರೂಪುಗೊಂಡಿತ್ತು. ನಿಜಕ್ಕೂ ಈ ಗೌರವ ಸಿಕ್ಕಿರುವುದು ಸಂತಸದಾಯಕವೇ.

ಜಗತ್ತಿನ ಸಾಹಿತ್ಯ ವಲಯದಲ್ಲಿ ಪ್ರತಿಷ್ಠಿತ ಎನ್ನುವ ಅಂತರಾಷ್ಟ್ರೀಯ ಬೂಕರ್‌ ಗೌರವಕ್ಕೆ ಭಾಜನರಾಗಿರುವ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರ ಮನದಾಳದ ನುಡಿ ಇವು.

ಕಳೆದ ಕೆಲವು ತಿಂಗಳಿನಿಂದ ನಡೆದಿದ್ದ ಆಯ್ಕೆ ಪ್...