Bengaluru, ಮೇ 15 -- ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್‌, ಮಗಳ ಬಗ್ಗೆ ಸರಣಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಗೋವಿಂದ ಪೂಜಾರಿ ಹಗರಣದಲ್ಲಿ ಕೋಟಿ ಕೋಟಿ ಹಣ ಹೊಡೆದಿದ್ದಾಳೆ. ಆ ಹಣವನ್ನು ಡಿವೈಡ್‌ ಮಾಡಿ, ಕುಟುಂಬದವರ ಹೆಸರಿಗೆ, ಪಡ್ಡೆ ಹುಡುಗರ ಹೆಸರಲ್ಲಿ ಇಡಿಸಿದ್ದಾಳೆ. ಅದೇ ಡಿಪಾಸಿಟ್‌ ಹಣದ ಮೇಲೆ ಸಾಲ ಪಡೆದು, ಆ ಸಾಲದಿಂದ ಬರುವ ಬಡ್ಡಿಯಲ್ಲಿ ವಂಚನೆ ಮಾಡಿ ತಿಂತಿದ್ದಾಳೆ" ಎಂದಿದ್ದಾರೆ.

"ದೇಶಕ್ಕೆ ಇವಳು ಮಾದಕ. ಇವಳು ನನ್ನ ಮಗಳು ಅಂತ ಹೇಳೋಕೆ ನನಗೆ ನಾಚಿಕೆ ಆಗುತ್ತಿದೆ. ಇಂಥವರಿಗೆ ಜನ ಸಪೋರ್ಟ್‌ ಮಾಡ್ತಾರಲ್ಲ ಅದೇ ದುರಂತ. ಸುಳ್ಳು ಹೇಳಿಕೆಗೂ ಮನ್ನಣೆ ಕೊಡಬಾರದು. ಸೈನಿಕರಿಗೆ ದುಡ್ಡು ಕೊಡ್ತೀನಿ ಎಂದಿದ್ದಾಳೆ. ಸ್ವಂತ ದುಡ್ಡು, ದುಡಿದ ದುಡ್ಡು ಕೊಟ್ಟಿದ್ದರೆ ನನಗೆ ಸಂತೋಷವಿತ್ತು. ಯಾರದೋ ತಲೆ ಒಡೆದು ಕೊಟ್ಟರೆ ಅದು ಸರೀನಾ?"

"ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ. ಯಾಕೆಂದ್ರ ಅವನೂ ಕಳ್ಳ. ಇವಳು ಕಳ್ಳಿ. ಕಳ್ಳರು ಕಳ್ಳರೇ ಮದುವೆ ಆಗಿದ್ದಾರೆ. ಯಾರ ತಲೆ ಹೊಡೆಯಬೇಕು ಅನ್ನೋದೆ ಇವರ ಉದ್ದೇಶ. ಯಾವ ಕ...