Bengaluru, ಮೇ 26 -- ಜೀ ಕನ್ನಡದಲ್ಲಿ ಎರಡು ಸೀರಿಯಲ್‌ಗಳು, ಒಂದು ರಿಯಾಲಿಟಿ ಶೋ ಆಗಮನದ ಹೊಸ್ತಿಲಿಗೆ ಬಂದು ನಿಂತಿವೆ. ಆದರೆ, ಅವುಗಳ ಅಧಿಕೃತ ಪ್ರಸಾರದ ದಿನಾಂಕ ಮಾತ್ರ ಈ ವರೆಗೂ ಘೋಷಣೆ ಆಗಿಲ್ಲ.

ʻಶ್ರೀರಸ್ತು ಶುಭಮಸ್ತುʼ, ʻಸೀತಾ ರಾಮʼ ಧಾರಾವಾಹಿಗಳ ಪೈಕಿ ಒಂದು ಸೀರಿಯಲ್‌ ಮುಗಿಯಬಹುದು ಎನ್ನಲಾಗಿತ್ತು. ಅದರಂತೆ, ಯಾರೂ ಊಹಿಸದ ರೀತಿಯಲ್ಲಿ ʻಸೀತಾ ರಾಮʼ ಧಾರಾವಾಹಿಯೇ ತನ್ನ ಆಟ ಮುಗಿಸಿದೆ. ಈಗಾಗಲೇ ಅಂತಿಮ ಸಂಚಿಕೆಗಳ ಪ್ರಸಾರ ಶುರುವಾಗಿದೆ.

ಇತ್ತ ಹೊಸ ಸೀರಿಯಲ್‌ ʻಕರ್ಣʼನ ಆಗಮನ ಯಾವಾಗ? ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ಕೊನೇ ವಾರದಲ್ಲಿ ʻಕರ್ಣʼ ತನ್ನ ಪ್ರಸಾರ ಆರಂಭಿಸಬೇಕಿತ್ತು. ಆದರೆ, ಅದ್ಯಾಕೋ ಇನ್ನೂ ಪ್ರಸಾರ ದಿನಾಂಕವನ್ನು ರಿವೀಲ್‌ ಮಾಡಿಲ್ಲ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸರಿಗಮಪ ಫಿನಾಲೆ ಭಾನುವಾರಕ್ಕೆ ಮುಗಿದಿರಬೇಕಿತ್ತು. ಮಳೆಯಿಂದಾಗಿ ಅದೂ ಕೂಡ ಒಂದು ವಾರ ಪೋಸ್ಟ್‌ಪೋನ್‌ ಆಗಿದೆ. ಅದು ಮುಗಿದ ಬಳಿಕವೇ ಕರ್ಣನ ಆಗಮನ ಎನ್ನಲಾಗಿತ್ತು. ಇದೀಗ ಕೆಲ ಮೂಲಗಳ ಪ್ರಕಾರ, ಜೂನ್‌ ಎರಡನೇ ವಾರ ʻಕರ್ಣʼ ಧಾರಾವ...