Bengaluru, ಏಪ್ರಿಲ್ 19 -- ಮೂರ್ನಾಲ್ಕು ತಿಂಗಳಿಂದ ʻಶ್ರೀ ರಾಘವೇಂದ್ರ ಮಹಾತ್ಮೆʼ ಸೀರಿಯಲ್‌ ಬಗ್ಗೆ ಹೇಳುತ್ತಲೇ ಬರುತ್ತಿದೆ ಜೀ ಕನ್ನಡ. ಆದರೆ, ಯಾವಾಗಿನಿಂದ ಎಂಬ ಸುಳಿವನ್ನು ಮಾತ್ರ ಈ ವರೆಗೂ ನೀಡಿರಲಿಲ್ಲ. ಇದೀಗ ಈ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋ ರಿಲೀಸ್‌ ಆಗಿದ್ದೇ ತಡ, ವೀಕ್ಷಕ ಬಳಗ ಸಂಭ್ರಮದಲ್ಲಿದೆ. ಬಹುಕೋಟಿ ವೆಚ್ಚದ ಸಿನಿಮಾದ ಟೀಸರ್‌ನಂತೆ ರಾಘವೇಂದ್ರ ಮಹಾತ್ಮೆ ಸೀರಿಯಲ್‌ನ ಪ್ರೋಮೋ ಮೂಡಿಬಂದಿದೆ. ಗ್ರಾಫಿಕ್ಸ್‌ ಮತ್ತು ಮೇಕಿಂಗ್‌ ಮೂಲಕವೇ ವೀಕ್ಷಕರ ಕಣ್ಣರಳುವಂತಿದೆ.

ವಿಷ್ಣುವಿನ ದರ್ಶನದ ಮೂಲಕ ಪ್ರೋಮೋ ತೆರೆದುಕೊಳ್ಳುತ್ತದೆ. ವಿಷ್ಣುವಿನ ಅಂಶದಿಂದ ಜನಿಸಿದ ಶಂಕುಕರ್ಣನೂ ಕಾಣಿಸುತ್ತಾನೆ. ಹರಿ ಭಕ್ತಿಯ ಹರಿಕಾರ ಭಕ್ತ ಪ್ರಹ್ಲಾದ, ಉಗ್ರ ನರಸಿಂಹನಿಂದ ಹಿರಣ್ಯ ಕಶಿಪುವಿನ ಸಂಹಾರವೂ ಪ್ರೋಮೋದಲ್ಲಿದೆ. ಬಳಿಕ ಮಧ್ವ ಪರಂಪರೆಯತ್ತ ಹೊರಳುವ ಪ್ರೋಮೋದಲ್ಲಿ ತಿರುಪತಿ ತಿಮ್ಮಪ್ಪನ ಮುಚ್ಚಿದ ಬಾಗಿಲನ್ನು ಶ್ರೀ ರಾಘವೇಂದ್ರ ಸ್ವಾಮಿಗಳೇ ತೆರೆಯುತ್ತಾರೆ. ಅಲ್ಲಿಗೆ ರಾಯರ ಮುಖದರ್ಶನವಾಗುತ್ತದೆ.

"ಅಖಂಡ ...