Bengaluru, ಮೇ 19 -- ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು ಗಾಲಿ ಜನಾರ್ದನ ರೆಡ್ಡಿ ಮಗ ಕಿರೀಟಿ ಅಭಿನಯದ 'ಜ್ಯೂನಿಯರ್'. ಚಿತ್ರೀಕರಣ ಪ್ರಾರಂಭವಾಗಿದ್ದೇನೋ ಗೊತ್ತು. ಒಂದು ಹಂತದಲ್ಲಿ ಚಿತ್ರ ನಿಂತಿದೆಯಾ, ಮುಂದುವರೆಯುತ್ತಿದೆಯಾ ಎಂಬ ಗೊಂದಲವೂ ಇತ್ತು. ಏಕೆಂದರೆ, ದೊಡ್ಡ ಮಟ್ಟದಲ್ಲಿ ಪ್ರಾರಂಭವಾದ ಚಿತ್ರ, ಇದೀಗ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ. ಜುಲೈ 18ರಂದು ಬಿಡುಗಡೆಯೂ ಆಗಲಿದೆ.

ಅದಕ್ಕೂ ಮೊದಲು ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ದೇವಿ ಶ್ರೀಪ್ರಸಾದ್‍ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ಲೆಟ್ಸ್ ಲೀವ್ ದಿಸ್ ಮೂವೆಂಟ್ .' ಹಾಡಿಗೆ ಕಿರೀಟಿ, ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಪವನ್ ಭಟ್ ಸಾಹಿತ್ಯ ಬರೆದಿದ್ದು,‌ ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ.‌

ಈ ಹಾಡು ಬಿಡುಗಡೆ ಸಮಾರಂಭದಲ್ಲಿ ರವಿಚಂದ್ರನ್‍ ಸಹ ಇದ್ದರು. ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡಿದ ಅವರು, 'ನಿರ್ದೇಶಕ ರಾಧಾಕೃಷ್ಣ ಕಥೆ ಹೇಳೋದು ಕಿವಿಯಲ್ಲಿ ಪಿಸುಗುಟ್ಟಿದಂತೆ ಇರುತ್ತದೆ....