ಭಾರತ, ಮೇ 15 -- ಹಿಂದುತ್ವವಾದಿ, ಪ್ರಖರ ಭಾಷಣಗಾರ್ತಿ ಎಂದೇ ಬಿಂಬಿಸಿಕೊಳ್ಳುವ ಚೈತ್ರಾ ಕುಂದಾಪುರ, ಇತ್ತೀಚೆಗಷ್ಟೇ ಬಹುಕಾಲದ ಗೆಳೆಯ ಶ್ರೀಕಾಂತ್‌ ಕಶ್ಯಪ್‌ ಅವರ ಜತೆಗೆ ಬಾಳ ಬಂಧನಕ್ಕೆ ಕಾಲಿಟ್ಟಿದ್ದರು. ಬಿಗ್‌ ಬಾಸ್‌ನ ಹಲವು ಸ್ನೇಹಿತರು ಸೇರಿ ಸಾಕಷ್ಟು ಜನ ಆಗಮಿಸಿ ನವ ಜೋಡಿಗೆ ಶುಭಹಾರೈಸಿದ್ದರು. ಇದೀಗ ಮದುವೆಯಾಗಿ ಕೆಲವೇ ದಿನಗಳು ಕಳೆಯುತ್ತಿದ್ದಂತೆ, ಮಗಳು ಚೈತ್ರಾಳ ಜನ್ಮ ಜಾಲಾಡಿದ್ದಾರೆ ಹೆತ್ತ ತಂದೆ ಬಾಲಕೃಷ್ಣ ನಾಯ್ಕ್‌! ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಕೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ನುಂಗಿದ ಇಂತ ಹೆಣ್ಣು ಬೇರೆ ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಬಾಲಕೃಷ್ಣ ನಾಯ್ಕ್‌ ದೂರಿದ್ದಾರೆ.

"ಕಳ್ಳರ ಕಳ್ಳರ ಮದುವೆಯ ಬಗ್ಗೆ ಏನನ್ನೂ ಹೇಳಲಾರೆ. ಆ ಶ್ರೀಕಾಂತ್‌ 12 ವರ್ಷಗಳಿಂದ ಅವನು ನಮ್ಮ ಮನೆಯಲ್ಲಿಯೇ ಇದ್ದವ. ಇವಳೂ (ಚೈತ್ರಾ ಕುಂದಾಪುರ) ಕಳ್ಳಿ. ದರೋಡೆ ಮಾಡುವುದು, ದೇಶಕ್ಕೆ ದ್ರೋಹ ಮಾಡುವುದು. ವಂಚನೆ ಮಾಡುವುದು. ಇವರಿಬ್ಬರ ಕಸುಬೇ ಅದು. ಅವಳಿಗಂತೂ ಮಾನ ಮರ್ಯಾದೆ ಇಲ್ಲ. ನಮ್ಮ ಕುಟುಂಬದ ಮ...