ಭಾರತ, ಮೇ 14 -- ರಾಕೇಶ್‌ ಪೂಜಾರಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರು ಉಡುಪಿ ಬಳಿಯ ನಿಟ್ಟೆ ಗ್ರಾಮಕ್ಕೆ ಜನಸಾಗರವೇ ಹರಿದುಬಂದಿತ್ತು. ದೂರದೂರಿನಿಂದ ಅವರ ಸ್ನೇಹಿತರು ಆಗಮಿಸಿದ್ದರು. ಆದರೆ, ʻಕಾಂತಾರ ಚಾಪ್ಟರ್‌ 1ʼ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಮರಳುತ್ತಿದ್ದಂತೆ, ರಾಕೇಶ್‌ ಪೂಜಾರಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನದ ಸುದ್ದಿ ಗೊತ್ತಾದರೂ, ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮಾತ್ರ ಅಂತ್ಯಕ್ರಿಯೆಗೆ ಆಗಮಿಸಲಿಲ್ಲ. ಇದೀಗ ಶೆಟ್ರ ಅನುಪಸ್ಥಿತಿಯೇ ಕೆಲವರ ಬೇಸರಕ್ಕೆ ಕಾರಣವಾಗಿದೆ. ʻನಿಮಗೆ ಅಮಾಯಕ ಜೀವಕ್ಕಿಂತ ಸಿನಿಮಾನೇ ಹೆಚ್ಚಾಯಿತೆನೋʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಕಾಮೆಂಟ್‌ ಹಾಕುತ್ತಿದ್ದಾರೆ.

ಕನ್ನಡದ ರಿಯಾಲಿಟಿ ಶೋ ಲೋಕದಲ್ಲಿ ತಮ್ಮ ಕಾಮಿಡಿ ಮೂಲಕವೇ ನೋಡುಗರ ಮೊಗದಲ್ಲಿ ನಗು ಉಕ್ಕಿಸುತ್ತಿದ್ದವರಲ್ಲಿ ರಾಕೇಶ್‌ ಪೂಜಾರಿ ಸಹ ಒಬ್ಬರು. ತಮ್ಮ ಬಾಡಿ ಲ್ಯಾಂಗ್ವೇಜ್‌, ಆಡುವ ಮಾತಿನ ಮೂಲಕವೇ ಎದುರಿಗಿದ್ದವರನ್ನು ಬರಸೆಳೆಯುವ ತಾಕತ್ತು ರಾಕೇಶ್‌ ಪೂಜಾರಿ...