ಭಾರತ, ಮೇ 26 -- ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಇದೀಗ ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ಶೋ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ನಟಿ ವಿಜಯಲಕ್ಷ್ಮೀ. ಕನ್ನಡ ಕಿರುತೆರೆಯಲ್ಲಿ ʻಲಕ್ಷಣʼ, ʻಮೈನಾʼ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಸದ್ಯ ಜೀ ಕನ್ನಡದ ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ʼ ಶೋನಲ್ಲಿ ಮಿಂಚುತ್ತಿದ್ದಾರೆ. ಹೀಗಿರುವಾಗಲೇ ಇದೇ ನಟಿ ತಮ್ಮ ಬಾಲ್ಯದ ಕೆಟ್ಟ ಕ್ಷಣದ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ. ಪಾಠ ಕಲಿಸಿದ ಶಿಕ್ಷಕರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ನಟಿ ವಿಜಯಲಕ್ಷ್ಮೀ ಕೃಷ್ಣ ಸುಂದರಿ. ಲಕ್ಷಣವಾಗಿದ್ದರೂ, ಬಣ್ಣದಲ್ಲಿ ಚೂರು ಕಪ್ಪು. ಆ ಒಂದೇ ಒಂದು ಕಾರಣಕ್ಕೆ ತಮ್ಮ ಬಾಲ್ಯದಲ್ಲಿ ಸಾಕಷ್ಟು ನೋವು, ತಿರಸ್ಕಾರವನ್ನು ಎದುರಿಸಿದ್ದಾರೆ. ಅಷ್ಟೇ ಅಲ್ಲ ಅದೇ ಮೈ ಬಣ್ಣದ ನೆಪದಲ್ಲಿ ಸಾಕಷ್ಟು ಸೀರಿಯಲ್‌ ಆಡಿಷನ್‌ಗಳನ್ನೂ ಕಳೆದುಕೊಂಡಿದ್ದಾರೆ. ಅದರಲ್ಲೂ ಬಾಲ್ಯದಲ್ಲಿ ಪಾಠ ಕಲಿಸುವ ಶಿಕ್ಷಕ, ಶಿಕ್ಷಕಿಯರೇ ವಿಜಯಲಕ್ಷ್ಮೀ...