ಭಾರತ, ಮೇ 28 -- ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿದ ನಟ ಕಮಲ್‌ ಹಾಸನ್‌ ಅವರ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ಸಹ ಮುಂದುವರಿದಿದೆ. ಇದರ ಬೆನ್ನಲ್ಲೇ ಡಾ. ರಾಜ್‌ಕುಮಾರ್‌ ಅವರ ಆಪ್ತ ಹಾಗೂ ಸಿನಿಮಾ ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಇದೇ ಕಮಲ್‌ ಹಾಸನ್‌ ಹೇಳಿಕೆಗೆ ಕೊಂಚ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ತಮಿಳುನಾಡಿನ ಶಾಲೆಗಳಲ್ಲಿ "ತಮಿಳು ದ್ರಾವಿಡ ಭಾಷೆಗಳ ತಾಯಿ" ಅಂತ ಏನಾದರು ಪಾಠ ಮಾಡುತ್ತಾರೋ? ಅನ್ನುವ ಅನುಮಾನ ನನಗೆ" ಎಂದು ಜಾಲತಾಣದಲ್ಲಿ ಸುದೀರ್ಘ ಬರಹವನ್ನು ಪೋಸ್ಟ್‌ ಹಂಚಿಕೊಂಡಿದ್ದಾರೆ.

"ಅಣ್ಣಾವ್ರನ್ನ ಬಿಟ್ಟರೆ ನಾನು ಇಷ್ಟಪಡುವ ನಟ ಕಮಲಹಾಸನ್. ಅವರ ವೈಚಾರಿಕ ಚಿಂತನೆಯ ಪರ ನಾನು. ಆದರೆ ಅವರ ಈ ಸ್ಟೇಟ್ಮೆಂಟ್ ತುಂಬಾ ಬಾಲಿಶವಾದದ್ದು ಅಥವಾ ಅಧ್ಯಯನದ ಕೊರತೆ ಇರಬಹುದು! "ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದು ಉತ್ತರದವರು ನಂಬಿಸಿರುವಂತೆ, ತಮಿಳುನಾಡಿನ ಶಾಲೆಗಳಲ್ಲಿ "ತಮಿಳು ದ್ರಾವಿಡ ಭಾಷೆಗಳ ತಾಯಿ" ಅ...