Bengaluru, ಮೇ 27 -- ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಇಂದ್ರ- ವಾಣಿ ದಂಪತಿಯ ಪುಣ್ಯ ತಿಥಿ ಕಾರ್ಯ ನೆರವೇರಿಸುತ್ತಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕರೀಮ್‌ ಕಾಕಾ ಅವರ ಆಗಮನವಾಗಿದೆ.

ಅಷ್ಟಕ್ಕೂ ಈ ಕರೀಮ್‌ ಕಾಕಾ, ದೇಸಾಯಿ ಕುಟುಂಬದ ಕಾರ್‌ ಡ್ರೈವರ್‌ ಆಗಿದ್ದವರು. ಇದೀಗ ದಿಢೀರ್‌ ಎಂದು ಸೂರ್ಯಪ್ರಕಾಶ್‌ ದೇಸಾಯಿ ಮನೆಗೆ ಆಗಮಿಸಿದ್ದಾರೆ.

ಇದೇ ವೇಳೆ ಸತ್ಯಜೀತ್‌ ಬಳಿ ಹೋದ ಕರೀಮ್‌ ಕಾಕಾ, ಹೇಗಿದ್ದವರು, ಹೇಗಾಗಿದ್ದೀರಿ? ಚಿಕ್ಕೆಜಮಾನ್ರು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ.

ಅಂದ್ರೆ, ಇಂದ್ರ- ವಾಣಿಯನ್ನು ಸತ್ಯ ಕೊಲೆ ಮಾಡಿಲ್ವಾ? ಎಂದಿದ್ದಾನೆ ಸೂರ್ಯಪ್ರಕಾಶ್‌.

ಅಲ್ಲೇ ಇದ್ದ ಭಾರ್ಗವಿ ಮಾತ್ರ ಕರೀಮ್‌ ಕಾಕಾನ ಮಾತು ಕೇಳಿ, ಒಳಗೊಳಗೆ ಕುದಿಯುತ್ತಿದ್ದಾಳೆ. ಈ ಸಮಯದಲ್ಲಿ ಇವನ್ಯಾಕೆ ಇಲ್ಲಿಗೆ ಬಂದ ಎಂದು ಭಾರ್ಗವಿ ಕಣ್ಣು ಕೆಂಪಗಾಗಿಸಿದ್ದಾಳೆ.

ಸತ್ಯ ಚಿಕ್ಕಪ್ಪ ಅತ್ತೆ ಮಾವನ್ನ ಕೊಲೆ ಮಾಡಿಲ್ಲ ಅಂದ್ರೆ, ಬೇರೆ ಯಾರೋ ಮಾಡಿರ್ಬೇಕಲ್ವಾ? ಅನ್ನೋ ಅನುಮಾನ ಸೀತಾಗೂ ಬಂದಿದೆ.

ಸೀತಾ ಹೇಳಿದ ಮಾತಿಂದ ರಾಮ್‌ ತಲೆಯಲ್ಲಿಯೂ ಹಲ...