Bengaluru, ಏಪ್ರಿಲ್ 17 -- ಜೀ ಕನ್ನಡದಲ್ಲಿ ಕರ್ಣ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದೇ ತಡ ಧಾರಾವಾಹಿ ಮೇಲಿನ ವೀಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ.

ಅದರಲ್ಲೂ ಕರ್ಣ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ ನಟ ಕಿರಣ್‌ ರಾಜ್‌. ಈ ಹಿಂದೆ ಕನ್ನಡತಿ ಸೀರಿಯಲ್‌ನಲ್ಲಿ ನಟಿಸಿದ್ದರು ಈ ನಟ.

ಕಲರ್ಸ್‌ ಕನ್ನಡದಲ್ಲಿ ಕನ್ನಡತಿ ಸೀರಿಯಲ್‌ ಮುಗಿದ ಬಳಿಕ ರಾನಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು.

ಆದರೆ, ಆ ಸಿನಿಮಾ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಹಾಗಂತ ಕಿರಣ್‌ ರಾಜ್‌ ಸಿನಿಮಾದಿಂದ ಹಿಂದೆ ಸರಿದಿಲ್ಲ. ಅದಾದ ಮೇಲೆ ಜಾಕಿ ಅನ್ನೋ ಚಿತ್ರದಲ್ಲಿಯೂ ಬಿಜಿಯಾಗಿದ್ದಾರವರು.

ಇದೆಲ್ಲದರ ನಡುವೆ ಕರ್ಣನಾಗಿ ಮತ್ತೆ ಕಿರುತೆರೆ ವೀಕ್ಷಕರ ಮನಗೆಲ್ಲಲು ಆಗಮಿಸುತ್ತಿದ್ದಾರೆ. ಹೆತ್ತವರಿಗೆ ಬೇಡವಾದ, ಊರಿಗೆ ಬೇಕಾದ ವೈದ್ಯನ ಕಥೆ ಈ ಕರ್ಣ.

ಈ ಕರ್ಣ ಸೀರಿಯಲ್‌ನಲ್ಲಿ ಬಹುತಾರಾಗಣವೇ ಇದೆ. ಟಿ. ಎಸ್‌ ನಾಗಾಭರಣ ಪ್ರಮುಖ ಪಾತ್ರದಲ್ಲಿದ್ದರೆ, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಈ ಸೀ...