Bengaluru, ಮೇ 7 -- ಭಾರತೀಯ ಸೇನೆ ರಾತ್ರೋ ರಾತ್ರಿ ಬಿರುಸಿನ ಕಾರ್ಯಾಚರಣೆ ನಡೆಸಿ ಪಹಲ್ಗಾಮ್‌ ದಾಳಿಯ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನದ ಉಗ್ರರ ಬಿಡಾರದ ಮೇಲೆ ದಾಳಿ ಮಾಡಿ, ಅವರ ಹುಟ್ಟಡಗಿಸಿದೆ. ಈ ದಾಳಿಯಲ್ಲಿ ಹಲವು ಉಗ್ರರು ಹತ್ಯೆಗೀಡಾದ ಶಂಕೆ ವ್ಯಕ್ತವಾಗಿದೆ. ಸೇನೆಯ ಈ ದಿಟ್ಟ ಉತ್ತರಕ್ಕೆ ಇಡೀ ದೇಶ ಜೈಕಾರ ಹಾಕುತ್ತಿದೆ. ಇದೇ ಯೋಜಿತ ದಾಳಿಯ ಬಗ್ಗೆ ಸೇನೆಯ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ಯೋಮಿಕ ಸಿಂಗ್ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದರು. ಇದೀಗ ಇದೇ ಸುದ್ದಿಗೋಷ್ಠಿಯ ಫೋಟೋಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‌

"ಈ ದೇಶದ ನಾಗರಿಕರನ್ನು ಹಿಂದೂ ಮುಸ್ಲಿಂ ಎಂದು ವಿಭಜಿಸಿ ಪರಸ್ಪರ ದ್ವೇಷ ಭಾವವನ್ನು ಪ್ರಚೋದಿಸುತ್ತಿರುವ ಎಲ್ಲರೂ ಸದಾ ಜೇಬಿನಲ್ಲಿ ಇಟ್ಟುಕೊಳ್ಳಬೇಕಾದ ಅತ್ಯಂತ ಶಕ್ತಿಶಾಲಿ ಚಿತ್ರ ಇದು. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ನಡೆಸಲಾದ ಪತ್ರಿಕಾಗೋಷ್ಠಿಯ ದೃಶ್ಯ ಇದು. ಮಧ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್...