ಭಾರತ, ಏಪ್ರಿಲ್ 25 -- Prakash Raj on PM Modi: ಬಿಜೆಪಿ ಸರ್ಕಾರವನ್ನು ಟೀಕಿಸುವ ಕೆಲಸದಲ್ಲಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತಷ್ಟು ಬಿರುಸಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕೊಂಚ ಖಾರವಾಗಿಯೇ ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನೇ ಗುರಿಯನ್ನಾಗಿಸಿಕೊಂಡು ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಈಗ ಮೂರು ಬಿಟ್ಟ ಮಹಾಪ್ರಭು ಎಂದು ಶುರುಮಾಡಿ, ಪ್ರಂಚ ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದಾರೆ.

ಮೊನ್ನೆಯಷ್ಟೇ ಹುಬ್ಬಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್‌ ರಾಜ್‌, "ಬಿಜೆಪಿಯವ್ರು ಹೆಣದ ರಾಜಕಾರಣ ಈ ಹಿಂದಿನಿಂದಲೇ ಮಾಡುತ್ತ ಬಂದವರಲ್ಲವೇ. ಇವರಿಗೆ ಹೆಣದ ರಾಜಕೀಯ ಬೇಕೇ ಬೇಕು. ಇವರಿಗೆ ಅಂತಃಕರಣ ಎಂಬುದೇ ಇಲ್ಲ. ಇದು ಒಂದು ಧರ್ಮದ ಮೇಲೆ ನಡೆದ ಅತ್ಯಾಚಾರ ಎಂದು ಬಿಂಬಿಸುತ್ತಾರೆಯೇ ಹೊರತು, ಹೆಣ್ಣಿನ ಮೇಲೆ ನಡೆದಿದೆ ಎಂಬುದು ಅವರಿಗೆ ಬೇಕಾಗಿಲ್ಲ" ಎಂದು ಹರಿಹಾಯ್ದಿದ್ದರು.

ಇದನ್ನೂ ಓದಿ: 'ಬಿಜೆಪಿಯವ್ರಿ...