'ದುಡ್ಡಿಗಾಗಿ, ನನ್ನ ಕುಟುಂಬಕ್ಕಾಗಿ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಮಾಡಬೇಕಾಯ್ತು'; ಸೋಲಿನ ದಿನಗಳನ್ನು ನೆನೆದ ರವಿಚಂದ್ರನ್
ಭಾರತ, ಏಪ್ರಿಲ್ 28 -- Ravichandran: ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್ವುಡ್ ಕಂಡ ಹಿರಿಯ ನಟ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ರಿಯಾಲಿಟಿ ಶೋಗಳ ಮೂಲಕ ಟಿವಿ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದ್ದಾರೆ. ಜತೆಯಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕನಸಿನ ಪ್ರೇಮಲೋಕ 2 ಪ್ರಾಜೆಕ್ಟ್ ಮೇಲೆಯೂ ಹೆಚ್ಚು ಸಮಯ ಹಾಕುತ್ತಿದ್ದಾರೆ. ಈ ನಡುವೆ ಬಿಡುವಿನ ಸಮಯ ಸಿಕ್ಕಾಗ ದೂರದೂರಿಗೆ ಕಾರ್ಯಕ್ರಮಗಳಿಗೂ ಹೋಗುವುದುಂಟು. ಹೀಗಿರುವಾಗ ಇತ್ತೀಚೆಗಷ್ಟೇ ಯಾದಗಿರಿಯ ಇಬ್ರಾಂಹಿಪುರಂಕ್ಕೆ ಹೋಗಿ ಬಂದಿದ್ದರು.
ಸಾಯಿಬಾಬಾ ದೇವಸ್ಥಾನ ಮತ್ತು 101 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಜೀವನದ ಏರುಪೇರುಗಳ ಬಗ್ಗೆಯೂ ರವಿಚಂದ್ರನ್ ಮಾತನಾಡಿದರು. ದೇವಸ್ಥಾನಕ್ಕೆ ಹೋಗದಿದ್ದರೂ ಆ ದೇವರ ಬಗ್ಗೆ ಅವರಿಗಿದ್ದ ನಂಬಿಕೆಯನ್ನೂ ಹೇಳಿಕೊಂಡಿದ್ದಾರೆ. ಜೀವನದಲ್ಲಿ ಮಾಡಿದ ತಪ್ಪುಗಳು, ಹೊಟ್ಟೆಪಾಡಿಗಾಗಿ ಮಾಡಿದ ಕೆಟ್ಟ ಸಿನಿಮಾಗಳ ಬಗ್ಗೆಯೂ ರವಿಚಂದ್ರನ್...
Click here to read full article from source
To read the full article or to get the complete feed from this publication, please
Contact Us.