ಭಾರತ, ಏಪ್ರಿಲ್ 28 -- Ravichandran: ಕ್ರೇಜಿಸ್ಟಾರ್‌ ರವಿಚಂದ್ರನ್‌ ಸ್ಯಾಂಡಲ್‌ವುಡ್‌ ಕಂಡ ಹಿರಿಯ ನಟ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ರಿಯಾಲಿಟಿ ಶೋಗಳ ಮೂಲಕ ಟಿವಿ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದ್ದಾರೆ. ಜತೆಯಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕನಸಿನ ಪ್ರೇಮಲೋಕ 2 ಪ್ರಾಜೆಕ್ಟ್‌ ಮೇಲೆಯೂ ಹೆಚ್ಚು ಸಮಯ ಹಾಕುತ್ತಿದ್ದಾರೆ. ಈ ನಡುವೆ ಬಿಡುವಿನ ಸಮಯ ಸಿಕ್ಕಾಗ ದೂರದೂರಿಗೆ ಕಾರ್ಯಕ್ರಮಗಳಿಗೂ ಹೋಗುವುದುಂಟು. ಹೀಗಿರುವಾಗ ಇತ್ತೀಚೆಗಷ್ಟೇ ಯಾದಗಿರಿಯ ಇಬ್ರಾಂಹಿಪುರಂಕ್ಕೆ ಹೋಗಿ ಬಂದಿದ್ದರು.

ಸಾಯಿಬಾಬಾ ದೇವಸ್ಥಾನ ಮತ್ತು 101 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಜೀವನದ ಏರುಪೇರುಗಳ ಬಗ್ಗೆಯೂ ರವಿಚಂದ್ರನ್‌ ಮಾತನಾಡಿದರು. ದೇವಸ್ಥಾನಕ್ಕೆ ಹೋಗದಿದ್ದರೂ ಆ ದೇವರ ಬಗ್ಗೆ ಅವರಿಗಿದ್ದ ನಂಬಿಕೆಯನ್ನೂ ಹೇಳಿಕೊಂಡಿದ್ದಾರೆ. ಜೀವನದಲ್ಲಿ ಮಾಡಿದ ತಪ್ಪುಗಳು, ಹೊಟ್ಟೆಪಾಡಿಗಾಗಿ ಮಾಡಿದ ಕೆಟ್ಟ ಸಿನಿಮಾಗಳ ಬಗ್ಗೆಯೂ ರವಿಚಂದ್ರನ್‌...