Bengaluru,ಬೆಂಗಳೂರು, ಮಾರ್ಚ್ 9 -- ಬೆಂಗಳೂರು: ಚುನಾವಣಾ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪುತ್ರನ ಆಸ್ತಿ ವಿವರಗಳನ್ನು ಒದಗಿಸದೇ ಅಕ್ರಮ ಎಸಗಿರುವ ಆರೋಪದಡಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮಂಜುಳಾ ಎಸ್‌. ಲಿಂಬಾವಳಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಈ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿರುವ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ, ಸಮನ್ಸ್‌ ಜಾರಿಗೆ ಆದೇಶ ಹೊರಡಿಸಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಮಾಜಿ ಸಚಿವ ನಾಗೇಶ್‌ ಟಿ. ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ವಿಚಾರಣೆಗೆ ದೂರನ್ನು ಅಂಗೀಕರಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ. ಪ್ರೀತ್‌ ಅವರು, ಪೊಲೀಸರ ಮೂಲಕ ಮಂಜುಳಾ ಅವರಿಗೆ ಸಮನ್ಸ್‌ ಜಾರಿಗೊಳಿಸುವಂತೆ ಮಾ.5 ಮಂಗಳವಾರವೇ ಆದೇಶ ಹೊರಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಗೆ ಮಂಜುಳಾ ಅವರು 2023ರ ಏಪ್ರಿಲ್‌ 18ರಂದು ನಾಮಪತ್ರ ಸಲ್ಲಿಸ...