Bengaluru, ಏಪ್ರಿಲ್ 28 -- Bhagyalakshmi Serial: ಶ್ರೇಷ್ಠಾ ಬಂದು ಸಾಲದ ಹಣ ಕೇಳಿ ಹೋದಾಗಿನಿಂದ ಭಾಗ್ಯಾಗೆ ನಿದ್ರೆ ಇಲ್ಲದಂತಾಗಿದೆ. ಕುಸುಮಾ ಕೂಡಾ ಭಾಗ್ಯಾ ಮೇಲೆ ಬೇಸರ ವ್ಯಕ್ತಪಡಿಸುತ್ತಾಳೆ. ಆ ದಿನ ನೀನು ನಮ್ಮನ್ನು ಕೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರೇಗುತ್ತಾಳೆ. ಇದೇ ಸಮಯಕ್ಕೆ ತಾಂಡವ್‌ ಕೂಡಾ ಭಾಗ್ಯಾ ಕಾಲೆಳೆಯಲು ಶುರು ಮಾಡುತ್ತಾನೆ.

ನೀನು ಜೀವನಪೂರ್ತಿ ದುಡಿದರೂ 2 ಲಕ್ಷ ರೂ. ಸಾಲ ತೀರಿಸಲು ಸಾಧ್ಯವೇ ಇಲ್ಲ. ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿಬಿಡು, ನಿನಗೆ 20 ಲಕ್ಷ ಕೊಟ್ಟುಬಿಡುತ್ತೇನೆ ಎನ್ನುತ್ತಾನೆ. ನಿಮ್ಮ ಬಳಿ ದುಡ್ಡು ಕೇಳುವಂತಿದ್ದರೆ ಯಾವಾಗಲೋ ಕೇಳುತ್ತಿದ್ದೆ, ಆದರೆ ನನಗೆ ಆ ಉದ್ದೇಶ ಇಲ್ಲ, ಕಷ್ಟವೋ ಸುಖವೋ ನಾನು ಸಾಲ ತೀರಿಸುತ್ತೇನೆ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಹೇಗೆ ತೀರಿಸುತ್ತೀಯ ಎಂದು ತಾಂಡವ್‌ ಪ್ರಶ್ನಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ, ಪಕ್ಕದ ಮನೆಯವರಿಗೆ ನಮ್ಮ ಚಿಂತೆ ಏಕೆ? ನಮ್ಮ ಕಷ್ಟ ನಮಗೆ, ನಾವು ಹೇಗಾದರೂ ಸಾಲ ತೀರಿಸುತ್ತೇವೆ. ಎಷ್ಟು ಬೇಕಾದ...